Cini NewsSandalwood

ಮಾರ್ಚ್ 8ಕ್ಕೆ‌ “ರಂಗನಾಯಕ” ಆಟ ಶುರು

ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ “ರಂಗನಾಯಕ” ಮಾರ್ಚ್ 8ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಮಠ , ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌ ಸೃಷ್ಟಿಸಿದ್ದ ‌ಗುರುಪ್ರಸಾದ್ ಜಗ್ಗೇಶ್ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆಯಾಗುತ್ತಿದೆ.15 ವರ್ಷಗಳ ನಂತರ ಮತ್ತೆ ಒಂದಾದ ಜಗ್ಗಣ್ಣ ಮತ್ತು ಗುರುಪ್ರಸಾದ್ ಜೋಡಿ ಈ ಸಲ ಪ್ರೇಕ್ಷಕರಿಗೆ ಯಾವ‌ ರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ಈ ಕಾರ್ಯಕ್ರಮದಲ್ಲಿ ನಾಯಕ ನಟ ಜಗ್ಗೇಶ್ ಮಾತನಾಡುತ್ತ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ. ಎನ್ನುತ್ತ ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು. ಗುರುಪ್ರಸಾದ್ ಜಗಮೊಂಡ, ಆತ ಯಾರು ಮಾತನ್ನೂ ಕೇಳೋನಲ್ಲ. ಮದವೇರಿದ ಒಂಟಿ ಸಲಗನಂತೆ ಎಂದು ನಿರ್ದೇಶಕರ ಕಾರ್ಯವೈಖರಿಯನ್ನು ಮೆಚ್ಚುಕೊಂಡರು.

ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಕಂಡಿತಾ ಒಳ್ಳೆದಾಗತ್ತೆ ಎಂದು ಮಾತನಾಡಿದ ಜಗ್ಗೇಶ್,
ಡಬ್ಬಿಂಗ್ ಸ್ಟುಡಿಯೋ ನಂಗೆ ತುಂಬಾ ಇಷ್ಟವಾದ ಜಾಗ ಯಾಕೆಂದರೆ ಚಿತ್ರೀಕರಣದಲ್ಲಿ ಮಾಡಿದ ಬಹುತೇಕ ತಪ್ಪುಗಳನ್ನು ಸರಿಪಡಿಸುವುದು ಆ ಒಂದು ಜಾಗದಲ್ಲಿ ಮಾತ್ರ ಎಂದರು. ಹಾಗೆಯೇ ಇಂಡಸ್ಟ್ರಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನವರಸ ನಾಯಕ ಜಗ್ಗೇಶ್ ಫೈನ್ ಓನ್ ಅನ್ನೋ ಡಬ್ಬಿಂಗ್ ಸ್ಟುಡಿಯೋವನ್ನು ಶುರು ಮಾಡುತ್ತಿದ್ದೇನೆ ಎಂದರು. ಅದು ಈ ಚಿತ್ರದ ನಿರ್ಮಾಪಕ ವಿಕ್ಯಾತ್ ಕೊಟ್ಟ ಪೇಮೆಂಟ್ ನಿಂದ ಎನ್ನುತ್ತಾ ಚಿತ್ರಕ್ಕೆ ಸಂಗೀತ ನೀಡಿದ ಅನುಪ್ ಅನುಪ್ ಸಿಳೀನ್ ಕಾರ್ಯ ವೈಕರಿ , ಛಾಯಾಗ್ರಾಹಕರ ಕೆಲಸ ಮತ್ತು ಕಲಾವಿದರ ಸಹಕಾರವನ್ನು ಕೊಂಡಾಡಿದರು.

ಇನ್ನು ಚಿತ್ರದ ನಿರ್ದೇಶಕ ಮಠ ಗುರುಪ್ರಸಾದ್ ಚಿತ್ರ ಆರಂಭದಿಂದ ಇಲ್ಲಿವರೆಗೂ ನಡೆದು ಬಂದ ಹಾದಿಯನ್ನು ವಿವರವಾಗಿ ಹಂಚಿಕೊಂಡರು.ಅದೇ ರೀತಿ ನಿರ್ಮಾಪಕ ವಿಖ್ಯಾತ್ ಕೂಡ ಚಿತ್ರ ಆರಂಭವಾದಾಗ ಒಂದಷ್ಟು ಅಡೆತಡೆಗಳು ಎದುರಾದವು, ಜಗಣ್ಣ ಹಾಗೂ ಗುರುಪ್ರಸಾದ್ ಕಾಂಬಿನೇಷನ್ ಈಗ ವರ್ಕೌಟ್ ಆಗಲ್ಲ ಸಿನಿಮಾ ಕಂಪ್ಲೀಟ್ ಕಷ್ಟ ಎಂದಿದ್ದರು , ಆದರೆ ಅದೆಲ್ಲವನ್ನು ಹೊರತುಪಡಿಸಿ ಇವತ್ತು ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಜಿ ಪಿಕ್ಚರ್ಸ್ ಮೂಲಕ ನಮ್ಮ ಸಿನಿಮಾ ಮಾರ್ಚ್ ಎಂಟಕ್ಕೆ ಬಿಡುಗಡೆ ಆಗುತ್ತದೆ.

ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು. ಅದೇ ರೀತಿ ಚಿತ್ರದ ನಾಯಕಿ ರಚಿತಾ ಮಹಾಲಕ್ಷ್ಮಿ , ತಾಯಿಯ ಪತ್ರ ಮಾಡಿರುವ ಚೈತ್ರ ಕೊಟ್ಟೂರು , ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಿನಿಮಾದಲ್ಲಿ ಹಲವಾರು ಅನುಭವಿ ಹಾಗೂ ಯುವ ಪ್ರತಿಭೆಗಳು ಕೂಡ ಅಭಿನಯಿಸಿದ್ದಾರಂತೆ. ಸದ್ಯ ಬಿಡುಗಡೆಯಾಗಿರುವ ‘ಎನ್ನ ಮನದರಸಿ’… ಹಾಡು ಬಾರಿ ವೈರಲ್ ಆಗಿದ್ದು , ಇನ್ನು ಸಿನಿಮಾ ಯಾವ ರೀತಿ ಸೆಳೆಯುತ್ತಿದೆ ಎಂಬುದನ್ನು ಕಾದು ನೋಡಬೇಕು.

error: Content is protected !!