Cini NewsSandalwood

ಪೌರಾಣಿಕ ಚಿತ್ರ ಮಾಡುವ ಆಸೆ : ಯುವರಾಜ್

ಅಭಿಮಾನಿಗಳನ್ನು ದೇವರೆಂದು ಕರೆದ ಚಂದನವನದ ವರನಟ , ಡಾ ರಾಜಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ಅಭಿನಯದ “ಯುವ” ಚಿತ್ರ ಯಶಸ್ವಿ ಮೂರನೇ ವಾರ ಪ್ರದರ್ಶನ ಕಾಣುತ್ತಿದ್ದು , ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಯುವರಾಜ್ ಕುಮಾರ್ ಮಾತನಾಡುತ್ತಾ ಇದೊಂದು ಫ್ಯಾಮಿಲಿ ಚಿತ್ರ , ತಂದೆ ಮಗನ ಸಂಬಂಧದ ಚಿತ್ರವಾಗಿದ್ದು, ಆಡಿಯನ್ಸ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅವಕಾಶ ನೀಡಿದಂತಹ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗೊಂದೂರ್ ರನ್ನ ಜೀವನ ಪರ್ಯಂತ ಮರಿಯುವುದಿಲ್ಲ , ಹಾಗೆಯೇ ನಿರ್ದೇಶಕ ಸಂತೋಷ್ ಆನಂದ್ ರಾಮ್ ನನ್ನ ಅಣ್ಣನಂತೆ ಬಹಳಷ್ಟು ಹೇಳಿಕೊಟ್ಟು ನನ್ನಲ್ಲಿ ಒಂದು ಉತ್ತಮ ಪಾತ್ರವನ್ನು ತೆಗೆಸಿದ್ದಾರೆ.

ಒಂದು ಪಾತ್ರವನ್ನು ನಿಭಾಯಿಸುವುದಕ್ಕೆ ಬಹಳಷ್ಟು ತಯಾರಿ ಅಗತ್ಯ , ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನೈಜಕ್ಕೆ ಒತ್ತು ಕೊಟ್ಟು ಸೆಟಲ್ಡ್ ಆಗಿ ಅಭಿನಯಿಸುವುದು ಬಹಳ ಕಷ್ಟ. ಆದರೂ ಹೇಳಿಕೊಟ್ಟದ್ದನ್ನು ಚಾಚು ತಪ್ಪದೇ ಪಾಲಿಸುವ ಪ್ರಯತ್ನ ಮಾಡಿದ್ದೇನೆ. ಮುಂದಿನ ಚಿತ್ರಗಳಲ್ಲಿ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಜನರ ಮನಸ್ಸನ್ನು ಹೆಚ್ಚು ಗೆಲ್ಲುತ್ತೇನೆ ಎಂದರು.

ನನ್ನ ತಾತನ ಹುಟ್ಟು ಹಬ್ಬದಂದು ನನ್ನ ಮತ್ತೊಂದು ಚಿತ್ರದ ಅನೌನ್ಸ್ಮೆಂಟ್ ಕೂಡ ಆಗಲಿದೆ ಎನ್ನುತ್ತಾ , ನನಗೆ ಪೌರಾಣಿಕ ಚಿತ್ರಗಳು ಮಾಡುವ ಆಸೆ ಇದೆ. ಹಾಗೆ ಮೈಸೂರು ಸಂಸ್ಥಾನದ ರಾಜರ ಆಳ್ವಿಕೆಯ ಕಾಲಘಟ್ಟವು ನಾವೆಲ್ಲ ಕೇಳಿದ್ದೇವೆ. ಹಾಗಾಗಿ ನನಗೆ ರಾಜರ ಚಿತ್ರವನ್ನು ಮಾಡುವ ಬಯಕೆಯೂ ಇದೆ.

ಅದೇ ರೀತಿ ಐತಿಹಾಸಿಕ , ಸಾಮಾಜಿಕ ಚಿತ್ರಗಳ ಬಗೆಯು ಒಲವಿದೆ. ನನ್ನ ತಾತ ಅಭಿನಯಿಸಿರುವ ರಣಧೀರ ಕಂಠೀರವ , ಮಯೂರ , ಬಬ್ರುವಾಹನ ದಂಥ ಚಿತ್ರಗಳು ನನಗೆ ಹೆಚ್ಚು ಇಷ್ಟ. ಆ ರೀತಿಯ ಪಾತ್ರಗಳ ಮಾಡುವ ಬಯಕೆಯು ಇದೆ. ಅದಕ್ಕೊಂದು ಸೂಕ್ತ ತಂಡ , ಕಥಾವಸ್ತುಗಳು ಸಿಗಬೇಕಿದೆ.

ನಮ್ಮ ಪ್ರಯತ್ನ ಹಾಗೂ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ತಾತನ ಮಹದಾಸೆಯ ಚಿತ್ರಗಳಾದ ಭಕ್ತ ಅಂಬರೀಶ , ನೃಪತುಂಗ ಕಥಾ ವಸ್ತುಗಳ ಬಗ್ಗೆ ಕೂಡ ಒಮ್ಮೆ ಮಾತುಕತೆ ನಡೆದಿತ್ತು. ಈಗ ಬಿಡುಗಡೆಗೊಂಡಿರುವ ನನ್ನ “ಯುವ” ಮೊದಲ ಚಿತ್ರ ಹೊರಬಂದಿದೆ. ಇನ್ನು ಸಾಗುವ ದಾರಿ ತುಂಬಾ ಇದೆ.

ಹಾಗಯೇ ನನ್ನ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಸ್ಥಾಪಿಸಿರುವ ಪಿ. ಆರ್. ಕೆ ಸಂಸ್ಥೆಯ ಮೂಲಕ ನಮ್ಮ ಅಶ್ವಿನಿ ಆಂಟಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರಗಳೆಂದರೆ ಬಹಳ ಇಷ್ಟ. ಮುಂದಿನ ದಿನಗಳಲ್ಲಿ ಪಿ. ಆರ್. ಕೆ , ವಜ್ರೇಶ್ವರಿ ಸಂಸ್ಥೆಗಳ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸುತ್ತೇನೆ. ಈಗಾಗಲೇ ಹಲವಾರು ನಿರ್ಮಾಪಕರಿಂದ ಅವಕಾಶಗಳು ಬರ್ತಿದೆ.

ಕಥೆಯ ವಿಚಾರವಾಗಿ ಚರ್ಚೆಗಳು ನಡೆಯುತ್ತಿದೆ. ಸೂಕ್ತ ಸಮಯಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಂಡು ನನ್ನ ತಂದೆ , ತಾಯಿ, ಅಣ್ಣನ ಮಾರ್ಗದರ್ಶನದಂತೆ ಮುಂದುವರೆಯುತ್ತೇನೆ. ಅಭಿಮಾನಿಗಳನ್ನು ಸಂತೋಷಪಡಿಸುವುದೇ ನಮ್ಮ ಕೆಲಸ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಚಿತ್ರಗಳನ್ನು ನೀಡುವ ಭರವಸೆ ಕೊಡುತ್ತೇನೆ. ಅಭಿಮಾನಿಗಳ ಪ್ರೀತಿ , ಪ್ರೋತ್ಸಾಹ,ಸಹಕಾರ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.

error: Content is protected !!