ಹೊಸ ತಮಿಳು ಪ್ರಾಜೆಕ್ಟ್ ಗೆ ಮುಂದಾದ ಶ್ರೀ ಪುರಾತನ ಫಿಲ್ಮ್ಸ್.
ಇತ್ತೀಚಿನ ಕನ್ನಡಿಗರಿಗೆ ಅಪ್ಪ-ಮಗನ ಬಾಂಧವ್ಯ ಕತೆಯನ್ನು, ಭಾವನಾತ್ಮಕವಾಗಿ ತಿಳಿಸಿದ್ದ ಸನ್ ಆಫ್ ಮುತ್ತಣ್ಣ ಚಿತ್ರ ತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಯಾವುದೇ ಆಡಂಬರ, ಮೇಕಿಂಗ್ ವೈಭವೀಕರಣ ಇಲ್ಲದೆ ತಣ್ಣಗೆ ಒಂದು ಕತೆ ಹೇಳುವುದು ಹೇಗೆ ಎನ್ನುವ ದಾರಿಯನ್ನು ನಿರ್ದೇಶಕ ಶ್ರೀಕಾಂತ್ ಹುಣಸೂರು ಮತ್ತು ಶ್ರೀ ಪುರಾತನ ಫಿಲ್ಮ್ಸ್ ತಂಡ ‘ಸನ್ ಆಫ್ ಮುತ್ತಣ್ಣ’ ಕನ್ನಡ ಚಿತ್ರದ ಮೂಲಕ ಕಟ್ಟುಕೊಟ್ಟಿದ್ದರು . ಈಗ ತಮಿಳ್ ಚಿತ್ರ ಒಂದಕ್ಕೆ ಲಗ್ಗೆ ಇಟ್ಟಿದ್ದಾರೆ .
ಶ್ರೀ ಪುರಾತನ ಫಿಲ್ಮ್ಸ್ ವತಿಯಿಂದ ತಮಿಳ್ ಖ್ಯಾತ ನಟ *ಸೆಲ್ವರಾಘವನ್* ಜೊತೆ ಹೊಸ ಪ್ರಾಜೆಕ್ಟ್ ಮಾತುಕಥೆ ನೆಡೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಮುಹೂರ್ತ ಮಾಡಲಿದ್ದಾರೆ , ಈ ಸಿನಿಮಾದಲ್ಲಿ , ನಾಯಕ ನಟಿ ಸೇರಿದಂತೆ ಹಲವಾರು ಕನ್ನಡ ಕಲಾವಿದರಿಗೆ ಪ್ರಾಮುಖ್ಯತೆ ನೀಡಿದ್ದಾರೆ.
Visited 1 times, 1 visit(s) today