BollywoodCini NewsSandalwoodTV Serial

ಕುತೂಹಲ ಮೂಡಿಸಿದ “ಕಮಲ್ ಶ್ರೀದೇವಿ” ಚಿತ್ರದ ಪೋಸ್ಟರ್ ಲುಕ್.

ಚಂದನವನದಲ್ಲಿ ಈಗಾಗಲೇ ಕಮಲ್ ಎನ್ನುವ ಹೆಸರು ಕೇಳಿದಾಕ್ಷಣ ನೆನಪಿಗೆ ಬರೋದು ವಿವಾದದ ಹೇಳಿಕೆ ಕೊಟ್ಟ ವಿಚಾರ. ಆದರೆ ಇಲ್ಲೊಂದು ತಂಡ “ಕಮಲ್ ಶ್ರೀದೇವಿ” ಅನ್ನೋ ಶೀರ್ಷಿಕೆಯೊಂದಿಗೆ ಚಿತ್ರವನ್ನ ಆರಂಭಿಸಿದ್ದು , ಈ ಸಿನಿಮಾ ವಿಚಾರವನ್ನು ಹೇಳುವುದಕ್ಕೆ ಪತ್ರಿಕಾಗೋಷ್ಠಿಯನ್ನ ಕರೆದಿದ್ದು , ಕಮಲ್ ಹಾಸನ್ ಗೂ ಮತ್ತು ಈ ಕಮಲ್ ಶ್ರೀದೇವಿ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಇದೊಂದು ಮರ್ಡರ್ ಮಿಸ್ಟರಿಯ ಕಥೆಯನ್ನು ಒಳಗೊಂಡಿರುವಂತಹ ಚಿತ್ರವಾಗಿದ್ದು , ಎರಡು ವರ್ಷಗಳ ಹಿಂದೆಯೇ ನಾವು ಟೈಟಲ್ ರಿಜಿಸ್ಟರ್ ಮಾಡಿದ್ದೇವೆ ಎನ್ನುತ್ತಾ , ಚಿತ್ರದ ಕುರಿತು ಮಾಹಿತಿಯನ್ನು ಕೊಳ್ಳುವ ಮೊದಲೇ ಚಿತ್ರದ ಪೋಸ್ಟರ್ ಹಾಗೂ ಪಾತ್ರ ವರ್ಗಗಳ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪೋಸ್ಟರ್ ಡಿಸೈನ್ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದು, ಒಂದು ಮುದ್ದಾದ ಹೆಣ್ಣಿನ ಸುತ್ತ ಮರದ ಕೊಂಬೆ ರೆಂಬೆಯ ಮೇಲೆ ಪ್ರಾಣಿಗಳ ಚಿತ್ರಣವಿದ್ದು, ಬೇರೆದೆ ಕಥೆಯನ್ನು ಹೇಳಲು ಹೊರಟಂತಿದೆ. ಈ ಚಿತ್ರವನ್ನು ಎನ್. ಚಲುವರಾಯ ಸ್ವಾಮಿ ಅರ್ಪಿಸಿ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ. ಧನಲಕ್ಷ್ಮೀ ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದ ಮೂಲಕ ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸಿದ್ದು , ಸಚಿನ್ ಚಲುವರಾಯ ಸ್ವಾಮಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.


ಈ ಚಿತ್ರದ ನಾಯಕ ಸಚಿನ್ ಚೆಲುವರಾಯಸ್ವಾಮಿ ಮಾತನಾಡುತ್ತಾ ನಮ್ಮ ಚಿತ್ರಕ್ಕೂ ಹಾಗೂ ನಟ ಕಮಲ್ ಹಾಸನ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ, ನಾವು “ಕಮಲ್ ಶ್ರೀದೇವಿ” ಎನ್ನುವ ಟೈಟಲ್ ಜೊತೆಗೆ ಒಂದು ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ ಕಥೆಯನ್ನು ಇಟ್ಟು ಸಿನಿಮಾ ಆರಂಭಿಸಿದ್ದೇವೆ. ಈಗಾಗಲೇ 70ರಷ್ಟು ಚಿತ್ರೀಕರಣ ಮುಗಿದಿದೆ. ಈ ಒಂದು ಚಿತ್ರ ನಮ್ಮ ಬ್ಯಾನರ್ ನಲ್ಲಿ ನಮ್ಮ ತಾಯಿ ನಿರ್ಮಾಣ ಮಾಡುತ್ತಿದ್ದಾರೆ. ನನ್ನ ಆತ್ಮೀಯ ಗೆಳೆಯ ರಾಜ ವರ್ಧನ್ ಸಹ ನಿರ್ಮಾಪಕರಾಗಿ ಇಡೀ ಚಿತ್ರದ ಜವಾಬ್ದಾರಿಯನ್ನ ಹೊತ್ತುಕೊಂಡು ಮುಂದೆ ಸಾಗಿದ್ದಾರೆ. ನನ್ನದು ಈ ಚಿತ್ರದಲ್ಲಿ ಒಬ್ಬ ಫಿಲಂ ಡೈರೆಕ್ಟರ್ ಪಾತ್ರವಾಗಿದೆ. ಈ ಚಿತ್ರದಲ್ಲಿ ಬರುವ ಪ್ರತಿಯೊಬ್ಬರ ಪಾತ್ರವೂ ಬಹಳ ವಿಶೇಷವಾಗಿದೆ. ನನ್ನ ಸಿನಿಮಾ ಗ್ರಾಫ್ ಗೆ ಈ ಚಿತ್ರ ಬಹಳ ವಿಶೇಷ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಕೊಡ್ತಾ ಹೋಗ್ತೇವೆ ಎಂದರು.

ಹಾಗೆಯೇ ಚಿತ್ರದ ಸಹ ನಿರ್ಮಾಪಕರಾದ ರಾಜವರ್ಧನ್ ಮಾತನಾಡುತ್ತ ಈ ಚಿತ್ರ ನಾನು ಮಾಡಬೇಕಿತ್ತು, ನನ್ನ ಸ್ನೇಹಿತ ಮಮ್ಮಿ ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ , ಗೊಂಬೆಗಳ ಲವ್ ಸಂತೋಷ್ “ಕಮಲ್ ಶ್ರೀದೇವಿ” ಟೈಟಲ್ ಕೊಟ್ಟಿದ್ದಾರೆ. ಬಹಳ ವಿಭಿನ್ನವಾಗಿರುವ ಈ ಕಂಟೆಂಟ್ ಬೇಸ್ ಸಬ್ಜೆಕ್ಟ್ ನನ್ನ ಗೆಳೆಯ ಸಚಿನ್ ಮಾಡಲಿ ಎಂದು ನಿರ್ಧರಿಸಿ ಚಿತ್ರದ ಬೆನ್ನೆಲುಬಾಗಿ ನಿಂತುಕೊಂಡೆ . ಈ ಚಿತ್ರದಲ್ಲಿ ಏಳು ಪಾತ್ರಗಳು ಏಳು ಪ್ರಾಣಿಗಳ ರೂಪದಲ್ಲಿ ಕಥೆ ಸಾಗುತ್ತದೆ. ಈ ಚಿತ್ರಕ್ಕಾಗಿ ಮೂರು ಸೆಟ್ಟನ್ನ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಈಗ ಬಿಡುಗಡೆಯಾಗಿರುವ ಪೋಸ್ಟರ್ ಡಿಸೈನ್ ಕಾಣಿ ಪಿಚ್ಚರ್ ತಂಡ ಮಾಡಿದೆ. ಈಗಾಗಲೇ ನಮ್ಮ ಚಿತ್ರ ವಿದೇಶದಲ್ಲೂ ಬಿಡುಗಡೆ ಮಾಡಲು ಓವರ್ಸೀಸ್ ತಂಡದ ಜೊತೆ ಮಾತನಾಡಿದ್ದೇವೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು, ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಇದೇ ವರ್ಷ ತೆರೆಗೆ ಬರಲಿದೆ ಎಂದರು.


ಈ ಚಿತ್ರದ ನಿರ್ದೇಶಕ ವಿ.ಎ. ಸುನಿಲ್ ಕುಮಾರ್ ಮಾತನಾಡುತ್ತಾ ಇದು ನನ್ನ ಎರಡನೇ ಚಿತ್ರ , ಇದೊಂದು ಮರ್ಡರ್ ಮೀಸ್ಟ್ರಿಯ ಸಬ್ಜೆಕ್ಟ್. ನಮ್ಮ ನಟ ರಾಜವರ್ಧನ್ ಮೂಲಕ ನನಗೆ ಈ ಚಿತ್ರ ಸಿಕ್ಕಿದೆ. ಈ ಕಮಲ್ ಶ್ರೀದೇವಿ ಅನ್ನೋ ಲೆಂಜಡರಿ ಜೋಡಿಯ ಹೆಸರಿದೆ ಹೊರತು , ಅವರಿಬ್ಬರಿಗೂ ಸಂಬಂಧ ಪಟ್ಟಂತ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಹೊಲಿಗೆ ಇಲ್ಲ. ಈ ಮರ್ಡರ್ ಪ್ರಕರಣದ ಅಡಿ ಬರಹದ ಕೆಳಗೆ ಬರೆದಿರೋ ಕೇಸ್ ನಂಬರ್ ಕಥೆಯ ಒಳ ಮರ್ಮವನ್ನ ಹೇಳುತ್ತದೆ.
ಇದು ನೈಜ ಘಟನೆಯನ್ನಾಧ ರಿಸಿದ ಸಿನಿಮಾನಾ..? ಒಂದು ಹೆಣ್ಣಿನ ತಲೆಯನ್ನ ಪಾರಿವಾಳಗಳಿಂದ ಡಿಸೈನ್ ಮಾಡಿ ಮೈಗೆ ಹಾವು, ಗೂಬೆ, ಕಾಗೆ, ಊಸರವಳ್ಳಿ, ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವುದು ಯಾಕೆ ಎಂಬುದು ನಿಮಗೆ ಚಿತ್ರದಲ್ಲಿ ತಿಳಿಯುತ್ತದೆ. ಈಗ ಕೊನೆ ಹಂತದಲ್ಲಿದ್ದೇವೆ. ಸದ್ಯ ಪೋಸ್ಟರ್ ಬಿಡುಗಡೆ ಮಾಡಿದ್ದು , ಮುಂದಿನ ದಿನಗಳಲ್ಲಿ ಒಂದೊಂದೇ ವಿಚಾರ ಹೊರ ಬರಲಿದೆ ಎಂದರು.


ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಹಿರಿಯ ನಟ ಉಮೇಶಣ್ಣ , ಮಿತ್ರ , ರಾಘು ಶಿವಮೊಗ್ಗ , ಸೇರಿದಂತೆ ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಮಲ್ ಪಾತ್ರದಲ್ಲಿ ಸಚಿನ್ ಚೆಲುವರಾಯಸ್ವಾಮಿ ಅಭಿನಯಿಸಿದ್ದು , ಶ್ರೀದೇವಿ ಪಾತ್ರದಲ್ಲಿ ಯಾರು ಎಂಬ ಪ್ರಶ್ನೆ ಮೂಡಿದರು, ಪೋಸ್ಟರ್ ಡಿಸೈನ್ ನಲ್ಲಿ ಕುತೂಹಲವನ್ನು ಮೂಡಿಸಿದೆ. ಹಾಗೆಯೇ ಈ ಚಿತ್ರದಲ್ಲಿ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ , ಅಕ್ಷಿತಾ ಬೋಪಯ್ಯ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ. ತಾಂತ್ರಿಕವಾಗಿ ಚಿತ್ರತಂಡ ದೊಡ್ಡ ಭರವಸೆಯನ್ನ ಮೂಡಿಸಿದ್ದು, ಛಾಯಾಗ್ರಹಕ ನಾಗೇಶ್ ಆಚಾರ್ಯ , ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆ ಸಜ್ಜಾಗ್ತಿರೋ “ಕಮಲ್ ಶ್ರೀದೇವಿ” ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಂದ ಚಿತ್ರದ ಪ್ರಚಾರ ಕಾರ್ಯವನ್ನ ಅಧಿಕೃತವಾಗಿ ಆರಂಭಿಸಿದೆ.

error: Content is protected !!