“ಕಟ್ಟಾಳನ್”‘ ಬಿಡುಗಡೆಗೆ ಸಿದ್ದ… ಅಖಾಡಕ್ಕೆ ಸುನೀಲ್ ಮತ್ತು ಕಬೀರ್ ದುಹಾನ್ ಸಿಂಗ್ ಎಂಟ್ರಿ.
ಬಹಳಷ್ಟು ಕುತೂಹಲವನ್ನು ಮೂಡಿಸುವಂತಹ ದಟ್ಟಾರಣ್ಯದ ಹಿನ್ನೆಲೆಯಲ್ಲಿ ರೋಮಾಂಚಕ ಆಕ್ಷನ್, ಮೈನವಿರೇಳಿಸುವ ಕಥೆಯನ್ನು ಒಳಗೊಂಡಿರುವ ಆಂಟನಿ ವರ್ಗೀಸ್ ಮುಖ್ಯ ಭೂಮಿಕೆಯಲ್ಲಿ ಅಭಿನಯದ ಪೌಲ್ ಜಾರ್ಜ್ ನಿರ್ದೇಶನದ ಮೊದಲ ಚಿತ್ರ ಹಾಗೂ ಷರೀಫ್ ಮುಹಮ್ಮದ್ ಪ್ರಸ್ತುತಪಡಿಸುತ್ತಿರುವ ಈ ವಿಭಿನ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.’ಮಾರ್ಕೋ’ ನಂತಹ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿದ ನಂತರ ಕ್ಯೂಬ್ಸ್ ಎಂಟರ್ಟೈನ್ ಮೆಂಟ್ಸ್ ಮತ್ತೊಮ್ಮೆ ತನ್ನ ಮಹತ್ವಾಕಾಂಕ್ಷೆಯ ಚಿತ್ರ ‘ಕಟ್ಟಾಳನ್’ ರಾರಾಜಿಸಲಿದೆ.
ರೋಮಾಂಚಕ್ , ಆಕ್ಷನ್, ಮೈನವಿರೇಳಿಸುವ ಕಥೆ ಮತ್ತು ಅದ್ಭುತ ತಾರಾಬಳಗದೊಂದಿಗೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಸಜ್ಜಾಗಿದ್ದು , ಆಂಟನಿ ವರ್ಗೀಸ್ ನಾಯಕನಾಗಿರುವ ಈ ಚಿತ್ರದ ಕಥೆ ಅರಣ್ಯದ ಆಳದಲ್ಲಿ ಬದುಕುಳಿಯುವಿಕೆ ಮತ್ತು ವಿಧಿಯ ಕ್ರೂರ ಹೋರಾಟದಲ್ಲಿ ಸಿಲುಕಿರುವ ಒಬ್ಬ ಅಪ್ಪಟ ಮಾನವನ ಪಾತ್ರವಾಗಿದೆಯಂತೆ. ತಮ್ಮ ತೀವ್ರ ಅಭಿನಯ ಮತ್ತು ಗಮನಾರ್ಹ ಪ್ರದರ್ಶನಗಳಿಗೆ ಹೆಸರುವಾಸಿಯಾದ ಆಂಟನಿ, ‘ಕಟ್ಟಾಳನ್’ ಚಿತ್ರಕ್ಕೆ ಅಸಾಮಾನ್ಯ ಪ್ರಾಮಾಣಿಕತೆ ಮತ್ತು ದೃಢತೆಯನ್ನು ತಂದಿದ್ದು, ‘ಪುಷ್ಪಾ’ ಮತ್ತು ‘ಜೈಲರ್’ ನಂತಹ ಬ್ಲಾಕ್ ಬಸ್ಟರ್ ಯಶಸ್ಸಿನ ನಂತರ ಸುನೀಲ್ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರು ಇದುವರೆಗೂ ಕಾಣದ, ಶಕ್ತಿಶಾಲಿ ಮತ್ತು ಅನಿರೀಕ್ಷಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಅವರ ಹಿಂದಿನ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ರೋಮಾಂಚಕ ಅಚ್ಚರಿ ಕಾದಿದೆಯಂತೆ.
ಭಾರತೀಯ ಚಿತ್ರರಂಗಕ್ಕೆ ‘ಮಾರ್ಕೋ’ ಮೂಲಕ ಅತ್ಯಂತ ಕ್ರೂರ ಖಳನಾಯಕನನ್ನು ಪರಿಚಯಿಸಿದ ಕಬೀರ್ ದುಹಾನ್ ಸಿಂಗ್, ‘ಕಟ್ಟಾಳನ್’ ಗಾಗಿ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ ಜೊತೆ ಮತ್ತೆ ಕೈಜೋಡಿಸಿದ್ದಾರೆ. ಅವರ ಉಪಸ್ಥಿತಿಯು ಚಿತ್ರಕ್ಕೆ ಮತ್ತಷ್ಟು ಭಯಾನಕತೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಅವರ ಅಭಿನಯವು ಪ್ರೇಕ್ಷಕರ ಮನಸ್ಸಿನಲ್ಲಿ ಭಯಾನಕವಾಗಿ ಅಚ್ಚಳಿಯದೆ ಉಳಿಯಲಿದೆ. ‘ಕಾಂತಾರ’ ಚಿತ್ರದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಅವರ ಧ್ವನಿ ವಿನ್ಯಾಸವು ಚಿತ್ರದ ಪ್ರತಿ ಭಾವನೆ ಮತ್ತು ದಟ್ಟ ಅರಣ್ಯದ ವಾತಾವರಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
ಷಮೀರ್ ಮುಹಮ್ಮದ್ ಅವರ ಮನಮೋಹಕ ಛಾಯಾಗ್ರಹಣ ಮತ್ತು ಕೆಚಾ ಖಾಂಫಕ್ಡೀ ಹಾಗೂ ಕಲೈ ಕಿಂಗ್ಸನ್ ಅವರ ಅದ್ಭುತ ಸಾಹಸ ಸಂಯೋಜನೆ ಯೊಂದಿಗೆ, ‘ಕಟ್ಟಾಳನ್’ ಜಾನಪದ, ಭಾವನೆ ಮತ್ತು ಆಕ್ಷನ್ ಅನ್ನು ಅಸಾಧಾರಣವಾಗಿ ಬೆಸೆಯುತ್ತದೆ. ಈ ಅರಣ್ಯದ ಜಗತ್ತಿನಲ್ಲಿ ಪ್ರತಿಯೊಬ್ಬರೂ ಬೇಟೆಗಾರರಾಗಿರುತ್ತಾರೆ. ಅಥವಾ ಬೇಟೆಯಾಡುವವರಾ ಗಿರುತ್ತಾರೆ. ಕ್ಯೂಬ್ಸ್ ಇಂಟರ್ನ್ಯಾಷನಲ್ ನ ಒಂದು ಮಹತ್ವದ ಉಪಕ್ರಮವಾದ ‘ಕಟ್ಟಾಳನ್’, ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮೂಲಕ ಈ ರೋಮಾಂಚಕ ಕಥೆಯು ಭಾರತದಾದ್ಯಂತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.