ಸಸ್ಪೆನ್ಸ್, ಥ್ರಿಲ್ಲರ್, ಕೋರ್ಟ್ ರೂಂ ಡ್ರಾಮಾ “ಪಾರ್ಥನ್ ಪರಪಂಚ” ಚಿತ್ರೀಕರಣ
ಕನ್ನಡದಲ್ಲಿ ಜಡ್ಜ್ ಮೆಂಟ್ ಚಿತ್ರದ ನಂತರ ಮತ್ತೊಂದು ಕೋರ್ಟ್ ಹಾಲ್ ಡ್ರಾಮಾ ಚಿತ್ರ ನಿರ್ಮಾಣವಾಗುತ್ತಿದೆ. ಶ್ರೀಹರ್ಷ ಎಂ.ಎನ್. ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಪಾರ್ಥನ್ ಪರಪಂಚ.
ಸಿರಿ ಸಿನಿಮಾಸ್ ಮೂಲಕ ಸೀತಾ ಹರ್ಷವರ್ಧನ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಅಣ್ಣಯ್ಯ ಖ್ಯಾತಿಯ ವಿಕಾಶ್ , ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಧ್ಯ ಪಾರ್ಥನ್ ಪರಪಂಚ ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಶೂಟಿಂಗ್ ವಿಜಿಟ್ ಹಾಗೂ ಪತ್ರಿಕಾಗೋಷ್ಠಿ ಕೋರ್ಟ್ ಸೆಟ್ ನಲ್ಲೇ ನಡೆಯಿತು.
ಈ ವೇಳೆ ಮಾತನಾಡಿದ ನಿರ್ದೇಶಕ ಶ್ರೀಹರ್ಷ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಕೋರ್ಟ್ ರೂಂ ಡ್ರಾಮಾ, ರಂಗಾಯಣ ರಘು ಅವರು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮಾಡುತ್ತಿದ್ದಾರೆ. ಛಾಯಾಗ್ರಾಹಕರಾಗಿ ಜೈ ಆನಂದ್, ಸಂಗೀತ ನಿರ್ದೇಶಕರಾಗಿ ಅನಂತ್ ಆರ್ಯನ್ ಕೆಲಸ ಮಾಡುತ್ತಿದ್ದಾರೆ. ಇಡೀ ಚಿತ್ರದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ. ಈಗಾಗಲೇ 4-5 ದಿನಗಳ ಶೂಟಿಂಗ್ ಆಗಿದ್ದು, ಈಗ ಕೋರ್ಟ್ ಹಾಲ್ ಸೆಟ್ ನಲ್ಲಿ ನಡೆಯುತ್ತಿದೆ ಎಂದರು.
ಚಿತ್ರದ ನಿರ್ಮಾಪಕಿಯೂ ಆದ ಸೀತಾ ಮಾತನಾಡುತ್ತ ಒಂದು ಅದ್ಭುತವಾದ ಟೀಂ ರೆಡಿ ಆಗಿದೆ. ನಮ್ಮ ಸಿರಿ ಸಿನಿಮಾಸ್ ಮೂಲಕ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರ ಕೂಡ ಮಾಡುತ್ತಿದ್ದೇನೆ ಎಂದರು.
ನಾಯಕ ವಿಕಾಸ್ ಮಾತನಾಡುತ್ತ ಇವತ್ತಿನ ದಿನಕ್ಕೆ ಹೊಂದುವ ಕಥೆ. ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಸಿನಿಮಾ, ನಾನು ಕೈಡ ಲಾಯರ್, ಒಂದು ಕೇಸ್ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತ ಹೋಗುತ್ತದೆ ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ ಎಂದು ಹೇಳಿದರು. ನಾಯಕಿ ಮಂದಾರ ಮಾತನಾಡಿ ಬ್ಲಾಂಕ್ ಚಿತ್ರದ ನಂತರ ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿದ್ದೆ. ಜಂಜಿ ಹುಡುಗಿ. ನೋಟಾ ಲೈಫ್ ಸ್ಟೈಲ್, ನಿರ್ದೇಶಕರು ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ಕ್ರಿಯೇಟ್ ಮಾಡಿದ್ದಾರೆ. ಕಥೆ ಕೇಳಿ ಖುಷಿಯಾಯ್ತು ಎಂದರು.
ನಟ ಅಮಿತ್ ಮಾತನಾಡಿ ನನ್ನದು ಮಾಯಕ್ ಎಂಬ ಪಾತ್ರ. ತುಂಬಾ ಇಂಟರೆಸ್ಟಿಂಗ್ ಆಗಿದೆ ಎಂದರು.ರಂಗಾಯಣ ರಘು ಮಾತನಾಡಿ ಹರ್ಷ ಈಗಾಗಲೇ ಟಿವಿನಲ್ಲಿ ವರ್ಕ್ ಮಾಡಿದ್ದಾರೆ. ಅವರು ಸಾಹಿತಿ ನರಸಿಂಹಮೂರ್ತಿ ಅವರ ಮಗ. ಈವರೆಗೆ ಯಾರೂ ಗೆಸ್ ಮಾಡಿರದಂಥ ಘಟನೆಯನ್ನು ಶ್ರೀಹರ್ಷ ಯೋಚನೆ ಮಾಡಿದ್ದಾರೆ. ವಿಕಾಸ್ ಮಡಿಕೇರಿ ಹುಡುಗ, ಇದರಲ್ಲಿ ಲಾಯರ್, ಒಂದು ಕ್ಲೂ ಹಿಂದೆ ಹೋದಾಗ ಏನೇನಾಗುತ್ತೆ ಅನ್ನೋದನ್ನು ಚೆನ್ನಾಗಿ ಹೇಳುತ್ತಿದ್ದಾರೆ. ಟಗರು, ಅಜ್ಞಾತವಾಸಿ, ಶಾಖಾಹಾರಿ ನಙತರ ಇದು ಬೇರೆ ಥರದ ಪಾತ್ರ ಎಂದರು.
ಡಿಓಪಿ ಜೈಆನಂದ್ ಮಾತನಾಡಿ ನಾನು 35 ಸಿನಿಮಾಗಳಿಗೆ ಕ್ಯಾಮೆರಾ ಮಾಡಿದ್ದರೂ ಇದೆ ಡಿಫರೆಂಟ್ ಕಥೆ. ಟ್ರೆಂಡಿ ಆಗಿದೆ. 45ದಿನಗಳ ಶೂಟಿಂಗ್ ಪ್ಲಾನಿದೆ. ಅದರಲ್ಲಿ 20ರಿಂದ 25 ದಿನ ಕೋರ್ಟ್ ಹಾಲ್ ನಲ್ಲೇ ಮಾಡುತ್ತಿದ್ದೇವೆ ಎಂದರು. ಸಂಗೀತ ನಿರ್ದೇಶಕ ಅನಂತ ಆರ್ಯನ್ ಮಾತನಾಡಿ ಚಿತ್ರದಲ್ಲಿ 4 ಹಾಡುಗಳಿವೆ. ಇಂದು ನಾಗರಾಜ್, ಶ್ರೀಹರ್ಷ ಬೆಳ್ಮಣ್ಣು ಹಾಡಿದ್ದಾರೆ. ಜಸ್ಕರಣ್ ಸಿಂಗ್ ಕೂಡ ಹಾಡುತ್ತಿದ್ದಾರೆ. ಯಾವ ಹಾಡೂ ರೆಗ್ಯುಲರ್ ಪ್ಯಾಟ್ರನ್ ನಲ್ಲಿ ಬಂದಿಲ್ಲ, ರೀರೆಕಾರ್ಡಿಂಗ್ ನಾನೇ ಮಾಡುತ್ತಿದ್ದೇನೆ ಎಂದರು.
ಸಂಭಾಷಣೆಗಾರ ಅನಿವಾರ್ಯ ಮಾತನಾಡಿ ಎಲ್ಲ ಪಾತ್ರಗಳಿಗೂ ಎಲ್ಲಿ ನನ್ನ ನನ್ನ ಮುಖವಾಡ ಕಳಚಿ ಬೀಳುತ್ತೋ ಎಂಬ ಭಯ ಕಾದಿರುತ್ತೆ. ರಘು ಅವರ ಪಾತ್ರ ಇಡೀ ಸಿನಿಮಾದ ಆತ್ಮ ಎನ್ನಬಹುದು ಎಂದರು. ಉಳಿದಂತೆ ನಟರಾದ ಸಂಪತ್ ಮೈತ್ರೆಯ, ಕಿರಣ್ ನಾಯಕ್ ಪಾರ್ಥನ ಪರಪಂಚ ಕುರಿತಂತೆ ಮಾತನಾಡಿದ್ವಾರೆ.
