Cini NewsSandalwood

ಡಬ್ಬಿಂಗ್ ಮುಗಿಸಿದ “ಕಬಂಧ” ಚಿತ್ರ.

Spread the love

ಕುಂಜಾರ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಕಬಂಧ ಚಿತ್ರಕ್ಕೆ ರಾಜರಾಜೇಶ್ವರಿ ನಗರದಲ್ಲಿರುವ ಟಾಪ್ಸ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದರ ಜೊತೆಗೆ ಹಾರರ್ ರೂಪದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸತ್ಯನಾತ್ ಈ ಚಿತ್ರದ ನಿರ್ದೇಶಕರು. ವಿಷ್ಣು ಪ್ರಸಾದ್ ಛಾಯಾಗ್ರಹಣ , ಸತ್ಯಜಿತ್ ಸಿದ್ದಕಾಂತ್, ̧ ಸಂಗೀತ ಸಾನಿತೇಜ್, ಈ ಚಿತ್ರವನ್ನು ದಾವಣಗೆರೆ, ತುಮಕೂರು ಸೇರಿದಂತೆ ಮುಂತಾದಡೆ 40 ದಿನ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕೆ ಸಾಹಿತ್ಯ ಕೆ .ಕಲ್ಯಾಣ್ ಬರೆದಿದ್ದು, ಈ ಚಿತ್ರದ ತಾರಾಗಣದಲ್ಲಿ ಪ್ರಸಾದ್ ವಶಿಷ್ಠ , ಪ್ರಿಯಾಂಕ ಮಲ್ಲಾದಿ , ಕಿಶೋರ್ ಕುಮಾರ್, ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ಧಿ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.

Visited 1 times, 1 visit(s) today
error: Content is protected !!