ಜೂನ್ 26 ರಂದು ಯುವ ಪ್ರತಿಭೆಗಳ “ಪಂಚಮುಖಿ” ಚಿತ್ರ ಬಿಡುಗಡೆ

Spread the love

ಎಸ್ ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಚಂದ್ರು ಆಚಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ಪಂಚಮುಖಿ” ಚಿತ್ರದ ಟ್ರೈಲರ್ ಹಾಗೂ ವಿಡಿಯೋ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಚಿತ್ರ ಜೂನ್ 26 ರಂದು ತೆರೆಗೆ ಬರುತ್ತಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾರಾರ್ ಜೊತೆಗೆ ನೋಡುಗರಿಗೆ ಬೇಕಾದ ಎಲ್ಲಾ ಮನೋರಂಜನೆಯ ಅಂಶಗಳು ಇರುವ ಈ ಚಿತ್ರದಲ್ಲಿ ನಾನೇ ನಾಯಕನಾಗೂ ನಟಿಸಿದ್ದೇನೆ. ಸ್ಪೂರ್ತಿ ಮನೋಹರ್ ಈ ಚಿತ್ರದ ನಾಯಕಿ. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ಚಿತ್ರಕ್ಕೆ ಚಾಲನೆ ದೊರೆಕಿತ್ತು.

ಕಾರಣಾಂತರದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ಇದೊಂದು ಕಡಿಮೆ ಬಜೆಟ್ ನ ಚಿತ್ರ. ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಿರ್ಮಾಣವಾಗಿರುವ ಚಿತ್ರವೂ ಹೌದು. ಈ ಚಿತ್ರದ ಬಹುತೇಕ ತಂತ್ರಜ್ಞರು ಹಾಗೂ ಕಲಾವಿದರು ಯಾವುದೇ ಸಂಭಾವನೆ ಪಡೆಯದೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ.

ಚಿತ್ರದಲ್ಲಿ ಅರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿರುವ 4 ಹಾಡುಗಳಿದೆ. ಖಿಚಿತ್ರ ಜೂನ್ 26 ಸಹಕಾರದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪ್ರವೀಣ್ ಪೂಜಾರಿ ನಾಡ ಛಾಯಾಗ್ರಹಣ ಹಾಗೂ ಅರವಿಂದ್ ಮಲ್ಲು ಅವರ ಸಂಕಲನ ಚಿತ್ರಕ್ಕೆ ಪೂರಕವಾಗಿದೆ‌. ಚಿತ್ರ ಜೂನ್ 26 ರಂದು ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಹಾಗೂ ನಾಯಕ ಚಂದ್ರು ಆಚಾರ್ ತಿಳಿಸಿದರು. ‌‌‌ ‌

ಈ ಚಿತ್ರದ ಕಥೆ ಚೆನ್ನಾಗಿದೆ. ನನ್ನದು ಇದು ಮೊದಲ ಚಿತ್ರ ಎಂದು ನಾಯಕಿ ಸ್ಪೂರ್ತಿ ಮನೋಹರ್ ಹೇಳಿದರು. ಹಾಡುಗಳ ಕುರಿತು ಸಂಗೀತ ನಿರ್ದೇಶಕ ಅರೋನ್ ಕಾರ್ತಿಕ್ ವೆಂಕಟೇಶ್ ಮಾಹಿತಿ ನೀಡಿದರು. ಸಂಕಲನಕಾರ ಅರವಿಂದ್ ಜೆ.ಪಿ ಮಲ್ಲು, ಕಲಾವಿದರಾದ ಪವನ್, ತೇಜಸ್, ಪೃಥ್ವಿ ಹಾಗೂ ವಿತರಕ ರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Visited 1 times, 1 visit(s) today
error: Content is protected !!