Cini NewsSandalwoodTV Serial

ಮೈಸೂರಿನ ಪತ್ರಕರ್ತರ ಭವನದಲ್ಲಿ `ಸೆಪ್ಟೆಂಬರ್ 10′ ಚಿತ್ರದ ಟೀಸರ್ ಬಿಡುಗಡೆ.

ಬದುಕಿನಲ್ಲಿ ಆತ್ಮಹತ್ಯೆ ಒಂದೇ ಎಲ್ಲಾ ಸಮಸ್ಯಗಳಿಗೂ ಪರಿಹಾರವಲ್ಲ ಎಂಬ ಸಂದೇಶವನ್ನು `ಸೆಪ್ಟೆಂಬರ್ 10′ ಚಿತ್ರದಲ್ಲಿ ಹೇಳಲಾಗಿದೆ ಎಂದು ನಿರ್ದೇಶಕ
ಓಂ ಸಾಯಿಪ್ರಕಾಶ್ ಅವರು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ `ಸೆಪ್ಟೆಂಬರ್
10′ ಚಿತ್ರದ ಟೀಜರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಸಹ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆತ್ಮಹತ್ಯೆಯನ್ನು ತಪ್ಪಿಸುವ ಆಶಯ ಮತ್ತು ಉದ್ದೇಶ ಇಟ್ಟುಕೊಂಡು ನಾನೀ ಚಿತ್ರವನ್ನು ನಿರ್ದೇಶಿಸಿದ್ದೇನೆ. ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಉತ್ತಮ ಸಂದೇಶ ಮತ್ತು ಮಾರ್ಗದರ್ಶನ ನೀಡುವ ಪ್ರಯತ್ನ ಈ ಚಿತ್ರದಲ್ಲಿದೆ. ಸೆಪ್ಟೆಂಬರ್ 10, ವಿಶ್ವ ಆತ್ಮಹತ್ಯೆ ತಡೆ ದಿನವಾಗಿದ್ದು, ಇದೇ ಕಾರಣಕ್ಕೆ ಆ ಟೈಟಲ್
ಇಟ್ಟಿದ್ದೇವೆ. ಬೆಳೆ ನಷ್ಟದಿಂದ ಕಂಗೆಟ್ಟ ರೈತರು, ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು, ಸಮಾಜ ಎದುರಿಸಲಾರದ ಪ್ರೇಮಿಗಳು, ವ್ಯವಹಾರದಲ್ಲಿ ನಷ್ಠ ಅನುಭವಿಸಿದ ವ್ಯಾಪಾರಿಗಳು ಇಂಥ ಐದಾರು ಕಂಟೆಂಟ್ ಇಟ್ಟುಕೊಂಡು ಅಂಥವರಿಗೆ ಮಾರ್ಗದರ್ಶನ ನೀಡುವ ಪ್ರಯತ್ನ ಈ ಚಿತ್ರದಲ್ಲಿದೆ. ಚಿತ್ರ ವೀಕ್ಷಿಸಿದ ಕೆಲವರಾದರೂ ತಮ್ಮ ಮನಸ್ಸು ಬದಲಾಯಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡರೆ ನಮ್ಮ ಪ್ರಯತ್ನ ಸಾರ್ಥಕ ಎಂದರು.


ಅಸಹಾಯಕ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಶ್ರೀನಿವಾಸಮೂರ್ತಿ ಮಾತನಾಡಿ, ಇದೊಂದು ವಿಶೇಷ ಚಿತ್ರ. ಈ ಥರದ ಸಮಾಜಮುಖಿ
ಚಿತ್ರಗಳಲ್ಲಿ ಅಭಿನಯಿಸಲು ಕಮರ್ಷಿಯಲ್ ಹೀರೋಗಳು ಒಪ್ಪಲ್ಲ. ಹಲವಾರು ಹಾಡುಗಳು, ಹೊಡೆದಾಟದ ದೃಶ್ಯಗಳು ಇದ್ದರೆ ಅವರು ಒಪ್ಪುತ್ತಾರೆ. ಎಷ್ಟು ಜನ ನಾಯಕ ನಟಿಯರು ಇದ್ದಾರೆ ಎಂದು ಕೇಳುತ್ತಾರೆ. ಸೆಪ್ಟೆಂಬರ್ ೧೦ ಸಿನಿಮಾದಲ್ಲಿ ಕಥೆಯೇ ನಾಯಕ ಎಂದರು. ನಾಯಕ ನಟ ಜಯಸಿಂಹ, ಗಣೇಶ್‌ರಾವ್ ಕೇಸರಕರ್, ಸಂಭಾಷಣೆಕಾರ ಬಿ.ಎ.ಮಧು ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕರಾದ ಡಾ.ಎಸ್.ರಾಜು, ಲಯನ್ಸ್ ಕ್ಲಬ್‌ ಅಧ್ಯಕ್ಷ ನಂದಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಸಂಗೀತ, ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ, ಬಿ.ಎ.ಮಧು ಅವರ ಸಂಭಾಷಣೆ ಈ ಚಿತ್ರಕ್ಕಿದ್ದು, ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಶಶಿಕುಮಾರ್, ಗಣೇಶ್‌ರಾವ್ ಕೇಸರಕರ್, ಸಿಹಿಕಹಿ ಚಂದ್ರು ಮತ್ತಿತರ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

error: Content is protected !!