Cini NewsMovie ReviewSandalwood

ಹ್ಯಾಂಗ್ ಮ್ಯಾನ್ ಬದುಕಿನ ವಿಧಿಯ ಆಟ : ‘ಮಾದೇವ’ ಚಿತ್ರವಿಮರ್ಶೆ (ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಮಾದೇವ
ನಿರ್ದೇಶಕ : ನವೀನ್ ರೆಡ್ಡಿ
ನಿರ್ಮಾಪಕ : ಆರ್. ಕೇಶವ (ದೇವಸಂದ್ರ)
ಸಂಗೀತ : ಪ್ರದ್ಯೋತ್ತನ್‍
ಛಾಯಾಗ್ರಹಣ : ಬಾಲಕೃಷ್ಣ
ತಾರಾಗಣ : ವಿನೋದ್ ಪ್ರಭಾಕರ್ , ಸೋನಾಲ್ ಮೊಂತೆರೊ, ಶ್ರೀನಗರ ಕಿಟ್ಟಿ, ಶೃತಿ , ಮಾಲಾಶ್ರೀ, ಅಚ್ಚುತ್ ಕುಮಾರ್, ಕಾಕ್ರೋಚ್ ಸುದಿ ಹಾಗೂ ಮುಂತಾದವರು…

ಸಮಾಜದಲ್ಲಿ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಸಹಿಸಲಾಗದಷ್ಟು ದುಷ್ಟ , ನೀಚ ಕೃತ್ಯ ಮಾಡಿದವರಿಗೆ ಕಾನೂನುಡಿಯಲ್ಲಿ ಗಲ್ಲು ಶಿಕ್ಷೆಯ ತಕ್ಕ ಉತ್ತರ ಎನ್ನಬಹುದು. ಇಂತದ್ದೇ ಒಂದು ವಿಚಾರದೊಂದಿಗೆ ಪಾಪಿಗಳನ್ನ ನೇಣು ಕುಡಿಕೆಗೆ ಹಾಕುವ ಒಬ್ಬ ಹ್ಯಾಂಗ್ ಮ್ಯಾನ್ ಬದುಕಿನ ಕಷ್ಟ ಕಾರ್ಪಣ್ಯದ ರೋಚಕ ಘಟನೆಗಳ ಸುತ್ತ , ಪ್ರೀತಿಯ ಸೆಳೆತದ ನಡುವೆ ಡ್ರಗ್ಸ್ ದಂಧೆಯ ಕರಾಳ ಸತ್ಯದ ಸುಳಿಯಲ್ಲಿ ಸ್ನೇಹ , ಪ್ರೀತಿ , ಮಮಕಾರ , ದ್ವೇಷದ ಕಥಾನಕ ಮೂಲಕ ವಿಭಿನ್ನ ಎಳೆಯುವೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮಾದೇವ”. ಯಾವುದಕ್ಕೂ ತಲೆಕೆಡಿಸಿಕೊಳ್ಳದ , ಭಾವನೆ ಇಲ್ಲದಂತಹ ನಿರ್ಜೀವವಾಗಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಅಬ್ಬಲಗೆರೆ ಕೇಂದ್ರ ಕಾರಾಗೃಹದಲ್ಲಿ ದುಷ್ಟರನ್ನ ನೇಣುಕುಡುಕೆಗೆ ಹಾಕುವುದೇ ತನ್ನ ಕಾಯಕವಾಗಿಸಿಕೊಂಡಿ ರುವ ವ್ಯಕ್ತಿ ಮಾದೇವ(ವಿನೋದ್ ಪ್ರಭಾಕರ್) ,ಇನ್ನು ಜೈಲು ವಾಸಿಗಳಲ್ಲಿ ಒಬ್ಬರದು ಒಂದೊಂದು ರೀತಿಯ ಕಥೆ ವ್ಯಥೆ.

ಇದರ ನಡುವೆ ಜೈಲಿನಲ್ಲಿರುವ ತನ್ನ ತಾಯಿಗೆ ಪ್ರತಿನಿತ್ಯ ಊಟ ಕೊಡಲು ಪರದಾಡುವ ಮಗಳು ಪಾರ್ವತಿ (ಸೋನಾಲ್ ಮೊಂತೆರೊ). ಆ ಊರಿನ ರೈಲ್ವೆ ಸ್ಟೇಷನ್ ನ ಟ್ರೈನ್ ಚಾಲಕ (ಅಚ್ಚುತ್ ಕುಮಾರ್) ಹಾಗೂ ಗೆಳೆಯ ಇವರಿಬ್ಬರ ಮಾತು ಕೇಳುವ ಮಾದೇವನ ವರ್ತನೆ ಉಳಿದವರಿಗೆ ಸಹಿಸಲು ಬಲು ಕಷ್ಟ. ಈ ವಿಚಾರ ತಿಳಿದ ಪಾರ್ವತಿ ತನ್ನ ತಾಯಿಯನ್ನು ಭೇಟಿ ಮಾಡಲು ಸೂಕ್ತ ವ್ಯಕ್ತಿ ಮಾದೇವ ಎಂದು ತಿಳಿದು ಅವನ ಸ್ನೇಹ , ಸಂಪರ್ಕದ ಹಲವು ಸಮಸ್ಯೆಗಳನ್ನು ಎದುರಿಸುತ್ತಾಳೆ. ಅವನ ಹಿನ್ನೆಲೆ ತಿಳಿಯುತ್ತಾ ಮಾದೇವನನ್ನ ಪ್ರೀತಿಸಲು ಮುಂದಾಗುತ್ತಾಳೆ. ತಾಯಿಯನ್ನ ಬಿಡಿಸಲು ಲಾಯರ್ ಸಂಪರ್ಕವು ಮಾಡುತ್ತಾಳೆ. ಇದರ ನಡುವೆ ಮತ್ತೊಬ್ಬ ದೃಷ್ಟ ವ್ಯಕ್ತಿ ಜಿಲೇಬಿ (ಕಾಕ್ರೋಚ್ ಸುದೀ) ಮರಣದಂಡನೆಗೆ ಗುರಿಯಾಗಿರುತ್ತಾರೆ.

ಮಗನನ್ನ ರಕ್ಷಿಸಿಕೊಳ್ಳಲು ತಾಯಿ ಕಮಲಾಕ್ಷಿ (ಶೃತಿ) ಮಾದೇವನ ಸಹಾಯ ಕೇಳಿದರು ಪ್ರಯೋಜನವಾಗುವುದಿಲ್ಲ. ಇದರ ನಡುವೆ ಸಮುದ್ರ (ಶ್ರೀನಗರ ಕಿಟ್ಟಿ) ತನ್ನದೇ ಒಂದು ಗ್ಯಾಂಗ್ ಸೃಷ್ಟಿಸಿಕೊಂಡು ಡ್ರಗ್ಸ್ ಮಾಫಿಯಾ ರುವಾರಿಯಾಗಿರುತ್ತಾನೆ. ಇವೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಮಾದೇವನ ಸುತ್ತ ಅವಳಿಸಿಕೊಳ್ಳುತ್ತಾ ಹೋಗುತ್ತದೆ. ಒಂದು ಕಡೆ ಪ್ರೀತಿ , ಮತ್ತೊಂದು ಕಡೆ ಮರಣದಂಡನೆಯ ವ್ಯಕ್ತಿ , ಇದರ ನಡುವೆ ಡ್ರಗ್ಸ್ ದಂಧೆಕೋರರ ನಡುವೆ ಮಾದೇವ ಎದುರಿಸುವ ಸಂಕಷ್ಟ ಏನೂ ಎಂಬುದನ್ನ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ನಟ ವಿನೋದ್ ಪ್ರಭಾಕರ್ ಈ ಹಿಂದೆ ಮಾಡಿರದಂತಹ ಒಂದು ಅದ್ಭುತ ಪಾತ್ರವನ್ನು ನಿಭಾಯಿಸಿದ್ದಾರೆ. ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ಜೀವಿಸಿದ್ದಾರೆ. ಹವಾ ಭಾವ ಮುಖದಲ್ಲಿ ತಟಸ್ಥ ಮನಸ್ಥಿತಿಯಲ್ಲಿ ಕಲ್ಲಿನ ಹೃದಯದ ವ್ಯಕ್ತಿಯಾಗಿ ಸಾಗಿ ಪರಿವರ್ತನೆಯ ರೂಪ ಪಡೆದು , ಅಚ್ಚರಿ ಎಂಬುವಂತೆ ಮನೋಗ್ನವಾಗಿ ಅಭಿನಯಿಸಿದ್ದಾರೆ. ಉತ್ತಮ ನಟ ಎಂಬ ಅವಾರ್ಡ್ ಪಡೆಯುವ ಅರ್ಹತೆ ಇದೆ.
ಅದೇ ರೀತಿ ಹಿರಿಯ ನಟಿ ಶೃತಿ ಕೂಡ ಎರಡು ಶೇಡ್ ನಲ್ಲಿ ಇಡೀ ಚಿತ್ರವನ್ನೇ ಆವರಿಸಿಕೊಂಡಿದ್ದಾರೆ. ಅವರ ಮೌನ , ಕಣ್ಣೋಟವೇ ಅದ್ಭುತ. ಮುದ್ದು ಮುದ್ದಾಗಿ ಹಳ್ಳಿ ಹುಡುಗಿಯ ಮಾತಿನ ವರಸೆ ಜೊತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ಅಭಿನಯಿಸಿದ್ದಾರೆ ನಟಿ ಸೋನಾಲ್.

ಇನ್ನು ಹಿರಿಯ ನಟ ಅಚ್ಚುತ್ ಕುಮಾರ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಖಡಕ್ ವಿಲ್ಲನ್ ಆಗಿ ನಟ ಶ್ರೀನಗರ ಕಿಟ್ಟಿ ಮಿಂಚಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಆಗಿ ನಟಿ ಮಾಲಾಶ್ರೀ ಸೇರಿದಂತೆ ಕಲಾವಿದರಾದ ಬಾಲರಾಜವಾಡಿ , ಕಾಕ್ರೋಚ್ ಸುದೀರ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇಂಥ ವಿಭಿನ್ನ , ಅರ್ಥಪೂರ್ಣ , ಅದ್ದೂರಿ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಕೇಶವ್. ಆರ್ (ದೇವಸಂದ್ರ) ಧೈರ್ಯ ಮೆಚ್ಚಲೇಬೇಕು. ಇನ್ನು ನಿರ್ದೇಶಕ ನವೀನ್ ರೆಡ್ಡಿ ಒಂದು ಉತ್ತಮ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರ ಗಮನ ಸೆಳೆಯುತ್ತದೆ.

ಕಲಾವಿದರು ಹಾಗೂ ತಂತ್ರಜ್ಞಾನರ ಆಯ್ಕೆ ಎರಡು ಅಚ್ಚುಕಟ್ಟಾಗಿ ಮಾಡಿದಂತಿದೆ. ಕಟುಕನ ನಡುವಳಿಕೆ , ಪ್ರೀತಿಯ ಪರಿವರ್ತನೆ , ಡ್ರಗ್ಸ್ ಜಾಲ , ಸೇಡಿನ ಕಿಚ್ಚು ಹೀಗೆ ಒಂದಷ್ಟು ವಿಷಯಗಳ ನಡುವೆ ಎಷ್ಟೇ ಕಟು ಮನಸ್ಥಿತಿ ಇದ್ದರೂ ಆತನಲೂ ಒಂದು ಮೃದು ಸ್ವಭಾವ ಇರುತ್ತದೆ ಎಂಬುದನ್ನ ಹೇಳುವುದರ ಜೊತೆಗೆ ವಿಧಿಯ ಆಟದ ಮುಂದೆ ಯಾರು ಇಲ್ಲ ಎಂಬ ಸತ್ಯ ಹೊರ ಹಾಕಿದ್ದಾರೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಿದರೆ ಚೆನ್ನಾಗಿರತ್ತಿತ್ತು. ಹೊಡಿ ಬಡಿ ಕೊಂಚ ಹೆಚ್ಚಾಯ್ತು ಅನಿಸುತ್ತದೆ. ಇಡೀ ಚಿತ್ರದ ಹೈಲೈಟ್ ಪ್ರದ್ಯೋತ್ತನ್‍ ಸಂಗೀತ , ಹಿನ್ನೆಲೆ ಸಂಗೀತ , ಹಾಗೆಯೇ ಬಾಲಕೃಷ್ಣ ಕ್ಯಾಮರಾ ಕೈಚಳಕ , ವಿಜಯ್ ಸಂಕಲನ , ( ಸಿ.ಜಿ) ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಅದ್ಭುತವಾಗಿದೆ. ಹೊಸ ದೃಶ್ಯಗಳನ್ನ ಕಟ್ಟಿ ಕೊಟ್ಟಿರುವ ರೀತಿ ಪರದೆಯ ಮೇಲೆ ಅದ್ಭುತವಾಗಿ ಕಾಣುತ್ತದೆ. ಒಂದು ಉತ್ತಮ ಚಿತ್ರ ಬಂದಿದ್ದು ಎಲ್ಲರೂ ಒಮ್ಮೆ ನೋಡುವಂತಿದೆ.

error: Content is protected !!